ಕಲಾವಿದರ ಸಾಮೂಹಿಕ ಪರಿಶ್ರಮವೇ ಪ್ರಸಂಗದ ಯಶಸ್ಸಿಗೆ ಕಾರಣ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಮೇ 23 , 2016
|
ಮೇ 23 , 2016
|
ಕಲಾವಿದರ ಸಾಮೂಹಿಕ ಪರಿಶ್ರಮವೇ ಪ್ರಸಂಗದ ಯಶಸ್ಸಿಗೆ ಕಾರಣ
ಸಾಸ್ತಾನ :
ಯಕ್ಷಗಾನ ಕಲಾವಿದರು ಹಿಮ್ಮೇಳ ಮುಮ್ಮೇಳದ ಸಾಂಗತ್ಯದಲ್ಲಿ ಸಾಮೂಹಿಕ ಪರಿಶ್ರಮಪಟ್ಟಲ್ಲಿಆದುನಿಕ ಪ್ರಸಂಗಗಳು ಯಶಸ್ವಿಯಾಗಬಲ್ಲವು. ಕೇವಲ ಪ್ರಸಂಗಕರ್ತರೊಬ್ಬರಿಂದಲೇ ಪ್ರಸಂಗ ಯಶಸ್ವಿಯಾಗದು. ಮೇಳದ ವ್ಯವಸ್ಥಾಪಕರು ಮತ್ತು ಕಲಾವಿದರ ಹೊಣೆಗಾರಿಕೆಯೂ ಅಷ್ಟೇ ಮುಖ್ಯ. ಗೋಳಿಗರಡಿ ಮೇಳದ ದಕ್ಷ ಯಜಮಾನರಾದ ವಿಠಲ ಪೂಜಾರಿಯವರ ನೇತ್ರತ್ವದಲ್ಲಿ ಮೂರು ಹೊಸ ಪ್ರಸಂಗಗಳು ಯಶಸ್ವಿಯಾದದ್ದು ಮೇಳಕ್ಕೂ ಕಲಾವಿದರಿಗೂ ಘನತೆಯನ್ನು ತಂದಿದೆ ಎಂದು ಯಕ್ಷಗಾನ ವಿಮರ್ಶಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.
ಅವರು ಶ್ರೀ ಗೋಳಿಗರಡಿ ಮೇಳದ ಕೊನೆಯ ದೇವರಸೇವೆಯಂದು ಮೇಳಕ್ಕೆ ಪ್ರಸಂಗಗಳನ್ನು ನೀಡಿದ ಕೊಡವೂರು ದಿನೇಶ ಸುವರ್ಣ,ಯಕ್ಷಾನಂದಕುತ್ಪಾಡಿಯವರನ್ನು ಮೇಳದ ವತಿಯಿಂದ ಸನ್ಮಾನಿಸಿ ಮಾತನಾಡಿದರು. ಗೋಳಿಗರಡಿ ಮೇಳದ ಯಜಮಾನರಾದ ಜಿ. ವಿಠಲ ಪೂಜಾರಿ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಾವಿದ ಐರೋಡಿ ಗೋವಿಂದಪ್ಪ ಆಗಮಿಸಿದ್ದರು. ಗರಡಿಯ ಪಾತ್ರಿ ಶಂಕರ ಪೂಜಾರಿ,ಸಮಿತಿಯ ಸದಸ್ಯರಾದ ಗಣಪಯ್ಯ ಆಚಾರ್ಯ,ಕೇಶವ ಆಚಾರ್ಯ,ಶಂಕರ ಕುಲಾಲ್,ರಾಜು ಪೂಜಾರಿ ಉಪಸ್ಥಿತರಿದ್ದರು. ಶ್ರೀ ಗಣೇಶ ಪಾಂಡೇಶ್ವರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
|
|
|